ಶನಿವಾರ, ಜುಲೈ 22, 2017

ಮೀಸಲು

ಮುಗ್ಧ ಮಾತುಗಳಾಗಲೇ ಮರೆಯಾಗಿ 
ಭಾವನೆಗಳು ಬಂಧಿಯಾಗಿವೆ ಒಳಗೆ 
ಕಾಲಚಕ್ರದ ಹಲವು ಸುತ್ತುಗಳಲಿ 
ಮನವು ಸದ್ದಿಲ್ಲದೇ ಏಕಾಂಗಿಯಾಗಿದೆ.... 

ಹುಚ್ಚೆದ್ದು ಕುಣಿಯುವಂತಹ ಅದೆಷ್ಟೋ 
ಭಾವಗಳು ಕಾಲ್ಮುರಿದುಕೊಂಡು ಕುಳಿತಿವೆ 
ಅಕ್ಕರೆಯ ಮಾತುಗಳೋ ಕಣ್ಮರೆಯಾಗಿವೆ 
ನಡುವೆ ಇದ್ದರೂ ಅತಿಯಾದ ಸಲುಗೆ 
ಅನುಭಾವಗಳ ಹಂಚಿಕೆಗೆ ಬೇಕಲ್ಲ ಘಳಿಗೆ... 

ದಿನನಿತ್ಯದ ಬದುಕ ಜಂಜಾಟದಲಿ 
ಏನೋ ಕಳೆದುಹೋದ ಖಾಲಿ ಭಾವ 
ಸ್ನೇಹದ ಕಡಲಲ್ಲಿ ಸಂತಸದಲೆಗಳಲಿ 
ತೇಲಬಯಸುವ ಸಾವಿರಾರು ಜೀವ... 

ಕಡಿಮೆಯಾಯಿತೇನೋ ಕಂಗಳಾ ಹೊಳಪು 
ಕಳೆದು ಹೋಯಿತೇನೋ 
ಹೇಳಬಯಸಿದ ಕತೆಗಳಾ ತುಣುಕು.. 
ಕಾರಣ ಸಮಯದ ಅಭಾವವೇ ಇಲ್ಲಾ 
ದಿನವಿಡೀ ದುಡಿದು ದಣಿದ ದೇಹವೇ?... 

ಏನೋ ಒಂದು ಉತ್ತರಿಸಿ 
ನಿರುತ್ತರನಾಗುವ ಬದಲು 
ಇಡಬಹುದಲ್ಲವೇ ಒಂಚೂರು 
ಸಮಯ ಅವರಿಗಾಗಿ ಮೀಸಲು... 

 - R. R. B.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...