ಭಾನುವಾರ, ಸೆಪ್ಟೆಂಬರ್ 22, 2019

ಅನಿಸಿದ್ದು ಅನಿಸಿದ ಹಾಗೆ..!!

ಕಂಡ ಕನಸುಗಳೆಲ್ಲ ಹಾಯಾಗಿ ನನಸಾಗುವಂತಿದ್ದರೆ 
ಕನಸಿಗೆ ಬೆಲೆಯೇ ಇರುತ್ತಿರಲಿಲ್ಲ, 
ಮಳೆಗಾಲದಲಿ ಕಾಣದಾಗುವ 
ಕೆರೆದಂಡೆಯ ಮಣ್ಣ ಮೇಲಿನ ಹೆಜ್ಜೆ ಗುರುತಿನ ಹಾಗೆ !! 

ಜೀವನದಲ್ಲಿ ಎಷ್ಟೇ ಮುಂದೆ ಹೋದರೂ
ಒಮ್ಮೆಯಾದರೂ ಹಿಂದೆ ತಿರುಗಲೇಬೇಕು, 
ಬಂದ ದಾರಿಯ ನೆನೆಯಲೇಬೇಕು, 
ಭೋರ್ಗರೆದು ದಡಕ್ಕಪ್ಪಳಿಸುವ ಶರಧಿಯ
ಅಲೆ ಮರಳ ತೊರೆದು ಮರಳಿ ಹೋಗುವ ಹಾಗೆ !! 

ಕಳೆದ ಸವಿ ಕ್ಷಣಗಳ ಮೆಲುಕು ಹಾಕುವುದು 
ಕೇವಲ ಕಹಿ ವಾಸ್ತವವನ್ನು ಮರೆಯಲಷ್ಟೇ ಅಲ್ಲ, 
ಸಿಹಿನೆನಪುಗಳ ಅಂಗಳವ ಹಸಿರಾಗಿಡಲು ಕೂಡಾ!! 

ಬದುಕೆಂಬ ಗುರು, ನಾವು ತಪ್ಪು ಮಾಡಿದಂತೆಲ್ಲ 
ಕಬ್ಬಿಣದ ಸ್ಕೇಲಿನ ಹೊಡೆತ ನೀಡುತ್ತಲೇ
ಇರುತ್ತಾನೆ - ಪಾಠ ಕಲಿವವರೆಗೆ, ಮೌಲ್ಯಗಳ ಅರಿವವರೆಗೆ‌...
ಏಕೆಂದರೆ ಜೀವನ ಕಾನ್ವೆಂಟ್ ಶಾಲೆಯಲ್ಲವಲ್ಲ !! 

-R.R.B. 

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...