ಭಾನುವಾರ, ಜುಲೈ 23, 2017

ಕಾಲೆಳೆಯುವವರು

ಎಲ್ಲರೂ ಕಾಲೆಳೆಯುವಾಗ 
ಮನದಿ ಏನೋ ತಲ್ಲಣ... 
ಎಲ್ಲರೆಂದರೆ ಸವ೯ರಲ್ಲ 
ಬಹುಸಂಖ್ಯಾತರಷ್ಟೆ. 
ಕಾಲೆಳೆವವರೇ ಹೆಚ್ಚಾದರೆ 
ಕೈ ಹಿಡಿದು ನಡೆಸುವರಾರು? 
ದಾರಿ ತೋರುವವರಾರು? 
ಗುರುವಿಲ್ಲದೇ ಕಲಿಯಲು 
ಎಲ್ಲರೂ ಏಕಲವ್ಯರಲ್ಲ. 
ಸಾಮಾನ್ಯರೊಳ ಸಾಮಾನ್ಯೆ ನಾನು 
ಪ್ರೇರಣೆ ನೀಡದಿರೆ ಓ.ಕೆ. 
ಆದರೆ ಭಯಪಡಿಸುವುದೇಕೆ? 
ವಿಶಾಲವಾದ ಈ ಜಗದಲಿ 
ಯಾರನ್ನೆಂದು ನಂಬಲಿ? 
ಬೇಕು ಪ್ರೀತಿಯ ಅಂಬಲಿ 
ಸಿರಿವಂತಿಕೆಯ ದಪ೯ ಸಾಕು 
ನಿಷ್ಕಲ್ಮಷ ಪ್ರೀತಿ ಬೇಕು. 
ಅದನು ನೀಡುವರಾರು? 
ಹಾದಿಗೆ ಜೊತೆಯಾಗುವರಾರು? 
ಮನ ಬಯಸಿದೆ ಸಾಂತ್ವನ 
ಅದ ನೀಡಲು ಆಹ್ವಾನ... 
ಏನೇ ಕಷ್ಟಗಳಿರಲಿ..... 
ಎಲ್ಲ ಕಾಲೆಳೆಯುವಾಗಲೂ 
ಮುಂದೆ ಸಾಗುತಿರಬೇಕು. 
ಅದೇ ನಿಜವಾದ ಜೀವನ 
ಆಗಲೇ ಬದುಕು ಪಾವನ 
ಮನವಾಗುವುದು ನಂದನವನ 

 - R. R. B.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...