ಭಾನುವಾರ, ಜುಲೈ 23, 2017

ಸಂದಿಗ್ಧತೆ

 ಮುಂದೊಂದು ಕನಸು 
 ಇಲ್ಲೊಂದು ಮನಸು 
 ಒಂದು ತಪ್ಪಾದ ಆಯ್ಕೆ 
 ನೆರವೇರುವುದೇ ಕಾಣ್ಕೆ?.. 

 ವೃತ್ತಿಗೇ ಒಂದು ದಾರಿ 
 ಪ್ರವೃತ್ತಿಗೆ ಬೇರೆಯೇ ಹಾದಿ 
 ಬದುಕೀಗ ಎರಡು ದೋಣಿಗಳ 
 ಮಧ್ಯೆ ಕಾಲಿಟ್ಟ ಮನುಜನಂತೆ.. 
 ತಲೆಯಲ್ಲಿ ನೂರಾರು ಚಿಂತೆ.. 

 ಕ್ಷಣಿಕ ಕಾಲದ ಸುಖಗಳೋ? 
ಇಲ್ಲಾ ಸುದೀಘ೯ ಕಷ್ಟಗಳೋ? 
ಮನವೀಗ ಗೊಂದಲದ ಗೂಡು 
ಕೇಳಬೇಕಿದೆ ಜೋಗುಳದ ಹಾಡು.. 

ಹತ್ತಿರದವರಿಂದ ದೂರಾಗಿ 
ದೂರದಲ್ಲೆಲ್ಲೋ ಮರೆಯಾಗಿ 
ಅಸ್ತಿತ್ವವೇ ಕಳೆದುಕೊಂಡ ಭಾವ 
ತೊಳಲಾಡುತಿದೆ ಈ ಜೀವ... 

ಎಲ್ಲೊ ಒಂದೆಡೆ ಭರವಸೆಯ ಬೆಳಕು 
ಕಣ್ಣಲ್ಲಿ ಕಂಡೂ ಕಾಣದ ಹೊಳಪು 
ಉತ್ತೇಜಿಸುತ್ತಲೇ ಇದೆ..... 
ಹಾಕು ಮುಂದೆ ಹೆಜ್ಜೆ ಹಾಕು ಎಂದು. 

 - R. R. B.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...