ಶನಿವಾರ, ಜುಲೈ 22, 2017

ಪರಿಶೋಧ

 ಗಾಜಿನಾ ಮನೆಯೊಳಗೆ 
ಅಮೂತ೯ ಕಲ್ಪನೆಯೊಡನೆ 
ಸಾಗುತಿಹ ಈ ಬದುಕು 
ಚಿಂತನೆಗಳೇ ಚುಟುಕು 

ಮನದಾಳದಿ ಉದ್ಭವಿಸುವ 
ಭಾವನೆಗಳು ಅತಿವೇದ್ಯ 
ನಿದಿ೯ಷ್ಟ ನಿಧಾ೯ರವಿಲ್ಲ ಸದ್ಯ 
ಕಳೆದುಕೊಂಡ ಭಾವದಿ ಮನ 
ಹುಡುಕುತಿದೆ ಪ್ರತಿದಿನ, ಕ್ಷಣ 

ಸಾಗರದಾಳದಿ ಕಳೆದಿಹ 
ರತ್ನಗಳಿಗೆ ಇಲ್ಲಾದರೆ ಶೋಧ 
ಏಕೀಭವಿಸುವುದೇ ಗಮನ? 
ದೊರಕೀತೆ ಕಳೆದಂತಹ ರತುನ? 
ಫಲಶ್ರುತಿಯಂತೂ ಮರೀಚಿಕೆ... 

ಏಕಾಗ್ರತೆಯೇ ಮಾಯವಾದರೆ 
ಕಾರ್ಯಕ್ಕೆಲ್ಲಿಯ ಗೌರವ? 
ಜೀವಜಲವೇ ಇಲ್ಲದಿರೆ 
ಶಿಲಾಲತೆಗೆಲ್ಲಿಯ ಪಲ್ಲವ? 
ವಾತಾವರಣ ಪ್ರಕ್ಷುಬ್ಧವಾದರೆ
ಕೇಳುವುದೇ ಹಕ್ಕಿಗಳ ಚಿಲಿಪಿಲಿ ? 

ಎಲ್ಲವೂ ಬರಿ ಅಯೋಮಯ 
ಎಲ್ಲಿಹುದೋ ಶಾಂತಿ,ಪ್ರೀತಿಗಳ 
ಸಂತಸಭರಿತ ನಿಲಯ? 
ದ್ವಂದ್ವಪೂಣ೯ ಈ ಜೀವನದಿ 
ಅಂಧಕಾರ ನೀಗಿಸಿ ಬೆಳಕಾಗುವ, 
ಸಂತಸದ ಹೊಂಗಿರಣ ಬೀರುವ 
ದಿನಕರನಿಗಾಗಿ ಪರಿಶೋಧ..... 

 - R. R. B.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...