ಶನಿವಾರ, ಜುಲೈ 22, 2017

ವ್ಯರ್ಥ

ಜೀವಜಲವೇ ಇಲ್ಲದಿರೆ 
ಆ ಕೆರೆ ಬಾವಿಗಳೇಕೆ? 
ಬೆಳಕನ್ನೇ ನೀಡದಿದ್ದರೆ 
ಆರಿದ ಹಣತೆಯಿನ್ನೇಕೆ? 
ಮಾಗ೯ದಶ೯ನವೇ ನೀಡದಿದ್ದರೆ 
ಆ ಗುರುವಿನ ಅಸ್ತಿತ್ವವೇಕೆ? 
ಭಾವನೆಗಳೇ ಇಲ್ಲವಾದರೆ 
ಆ ಮನುಜನಿರುವುದೇಕೆ? 
ವಾತ್ಸಲ್ಯವೇ ತೋರದಿರೆ 
ಆ ಸಂಬಂಧಗಳೇಕೆ? 
ತಂಗಾಳಿಯೇ ಲಭಿಸದಿರೆ 
ಆ ಗಾಳಿಪಂಕವಿನ್ನೇಕೆ? 
ನೆಮ್ಮದಿಯೇ ದೂರವಾದರೆ 
ಸೌಕರ್ಯಗಳಿಂದೇನು ಫಲ? 
ಪ್ರತಿಫಲವೇ ಮರೀಚಿಕೆಯಾಗೆ 
ಪ್ರಯತ್ನಕ್ಕಿನ್ನೆಲ್ಲಿ ಬೆಲೆ? 
ಕಾಳಜಿಯೇ ಇಲ್ಲವಾದರೆ 
ಆ ಹುಸಿನುಡಿಗಳೇಕೆ? 
ಅನುಭವಗಳೇ ಇಲ್ಲದಿರೆ 
ಇಷ್ಟು ದಿನ ಜೀವಿಸಿದ್ದೇನು? 
ಆಸಕ್ತಿಯೇ ಇಲ್ಲವಾದರೆ 
ಆ ಕಾರ್ಯ ಮಾಡುವುದೇಕೆ? 
ಸಾಧಿಸುವ ಹಂಬಲವೇ ಇರದಿರೆ 
ಜೀವಿಸುವುದಾದರೂ ಏಕೆ??? 

 - R. R. B.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...