ಒಮ್ಮೊಮ್ಮೆ ದಾಟಿ ಬರುತ್ತವೆ
ಕಾದ ಉಸುಕಿನ ತೀರದ ಬೇಲಿ...
ಜೀವಜಲ ನೀಡುವ ನದಿಯೂ
ಅಪರೂಪಕ್ಕೆ ಬದಲಿಸುತ್ತದೆ
ತನ್ನ ದಿನನಿತ್ಯ ಸಾಗುವ ಹರಿವ...
ಜಗದ ಅಂಧಕಾರ ತೊಡೆವ
ಅಂಬುಜಮಿತ್ರನೂ ಕೆಲವೊಮ್ಮೆ
ಉದಯವಾಗುವುದು ವಿಳಂಬ...
ಸಹನಾಮಯಿಯಾದ ಧರಿತ್ರಿಯೂ
ಮುನಿಸಿಕೊಂಡರೆ ನಡೆದಾಡುವ
ನೆಲದಲ್ಲಿ ನಿಲ್ಲದ ಭೂ ಕಂಪನ...
ಇಳೆಯ ಗೆಳೆಯ ವರುಣನಾದರೂ
ಕೆಲವೆಡೆ ಅನಾವೃಷ್ಟಿಯ ತಾಂಡವ
ಇನ್ನೆಲ್ಲೋ ಭಾರೀ ಜಲಪ್ರಳಯ...
ಸವ೯ಸಂಗವ ಪರಿತ್ಯಜಿಸಿದರೂ
ಸ್ವನಿಯಂತ್ರಣ ಕಳೆದುಕೊಂಡರೆ
ಸಹನೆ, ತಾಳ್ಮೆಯು ಮರೀಚಿಕೆ...
ಚರಿತಾಥ೯ದ ಇಳಿತ ಭರತಗಳಲಿ
ಲಕ್ಷೋಪಲಕ್ಷ ಅನಿಯಂತ್ರಿತ
ಭಾವನೆಗಳ ನಿರಂತರ ಪ್ರಸವ...
ಚಿಂತನ ಮಂಥನಗಳಲಿ ಮನಸು
ಕ್ರಾಂತಿಯ ಕಾಂತಿಬೀರಲಾರಂಭಿಸುತ
ಮೀರಲಿ ಕುಂದುಕೊರತೆಗಳ ಮಯಾ೯ದೆ....
- R. R. B.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ