ಶನಿವಾರ, ಜುಲೈ 22, 2017

ನೆನಹು

ಅರುಣ ಅಪರಾತ್ರಿ ಉದಿಸಿದರೂ 
ಅಂಶುಧರ ಅಮವಾಸ್ಯೆ ಕಂಡರೂ 
ಅಂಬುಧಿಯಲ್ಲರಳದು ಅಂಬುಜ.... 

ಎಡೆಬಿಡದೆ ಬಲ್ಸೋನೆ ಸುರಿದರೂ 
ಕೆರೆ - ಕಾಲುವೆಗಳು ತುಂಬಿ ಹರಿದರೂ 
ಅಸಂಗ್ರಹಿತ ಪದ್ಮಪತ್ರದ ಮೇಲಿನಾ ಹನಿ... 
ಮನದಲ್ಲಿನ ಚಿಂತನ - ಮಂಥನಗಳಿಗೆ 
ಹೊಂಬಾಳೆಯ ಹೊದಿಕೆ ಹೊದೆಸಿದರೂ 
ಯೋಚನಾಲಹರಿ ಅಮೂತ೯, ಅನಂತ ... 

 ಬದುಕೆಂಬ ಸುಂದರ ಅಂಗಳದಿ ನಿತ್ಯ 
ಅರಳುವ ಶಂಖಪುಷ್ಪದ ಪ್ರೀತಿ 
ಎಂದಿಗೂ ಬಾಡದು ಸ್ಮೃತಿಪಟಲದಲಿ... 

ಮನದ ನವಿರಾದ ತೋಟದಲಿ 
ಭಾವಲಹರಿ ನಿರಂತರ ನತಿ೯ಸಿದರೂ 
ಹೃದಯದಿ ಮಾತ್ರ ಮಸಣದಾ ಮೌನ.... 

ಕಡುಕಾನನದ ಝರಿ ತೊರೆಗಳಲಿ 
ಧುಮ್ಮಿಕ್ಕುವ ಜಲಪಾತದ ಉದಕದಲಿ 
ಸಂಚಯಿತ ಶಕ್ತಿಯು ಅಮೋಘ, ಅಗಾಧ... 
 ಕಲ್ಪನೆಗಳು ಅಶ್ವವೇಗದಲಿ ಓಡುತಿರೆ 
ಸಿಂಹಾವಲೋಕನಕೆ ಬೇಕಾಗಿದೆ 
ಗತವೈಭವಗಳ ನಲ್ಮೆಯಾ ನೆನಹು...

 - R. R. B.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...