ಶುಕ್ರವಾರ, ಆಗಸ್ಟ್ 21, 2020

ಮಳೆ ಕವಿತೆ


ಕೆಂಪು ಮಣ್ಣು ಹಸಿರು ತೋಟ
ಮನವ ಸೆಳೆವ ಅವಳ ನೋಟ
ಧರೆಯ ಕೊರಳ ಸೊಬಗ ಮಾಟ
ಆಕಾಶಕೆ ಸಿಹಿ‌ ಹಬ್ಬದೂಟ !

ಕುಣಿವ ಮಳೆ ನಗುವ ಇಳೆ
ಹರಿವ ಹೊಳೆ ತೊಳೆವ ಕೊಳೆ
ಅವನಿ'ಗೆ ಶೃಂಗಾರದ ಬಳೆ
ಹೊಚ್ಚ ಹೊಸ ಗರತಿ ಕಳೆ !

ಸೂರ್ಯ ಚಂದ್ರ ಜಂಟಿ ಹಕ್ಕಿ
ಮನದಿ ಒಲವ ಧಾರೆ ಉಕ್ಕಿ
ಸೇರಬಹುದೇ ಬಾನ ಚುಕ್ಕಿ
ಭುವಿಯ ಭಾವ ಹೆಕ್ಕಿ ಹೆಕ್ಕಿ !

ನೀಲ ಗಗನ ದಿವ್ಯ ಭವನ
ಸ್ಪರ್ಷ ಸ್ಮರಣ ಭಾವ ಸ್ಫುರಣ
ಬಾನು ಭೂಮಿ ನೋಡುತ ಕುಳಿತು
ಬಂತು ಕವನ ಸಮಯ ಮರೆತು !!

- R. R. B.


ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...