ಶನಿವಾರ, ಜುಲೈ 22, 2017

ಸಂಕ್ರಮಣ

 
ಮಕರಕೆ ಅಕ೯ನ ಆಗಮನ 
ಉತ್ತರಾಯಣದ ಈ ಪವ೯ದಿನ 
ಶುಭ ಘಳಿಗೆಗಳ ಸಂಚಯ 
ಹಷ೯ವೀ ಮನವೆಂಬಾಲಯ 
 ಮನೆ ಮನೆಗಳಲಿ ತಿಲ - ಬೆಲ್ಲ 
ಜೊತೆಯಲಿ ಸಿಹಿಯಾದ ಕಬ್ಬು 
ಮರೆಸುತ್ತ ಕಹಿ ಘಟನೆಗಳನೆಲ್ಲ 
ನೀಡುವುದು ಮನಕೆ ಆನಂದ 
 ಎಳ್ಳು - ಬೆಲ್ಲವನು ಹಂಚುತ 
ಒಳ್ಳೊಳ್ಳೆಯ ಮಾತನಾಡುತ 
ದುಃಖ, ನೋವನು ಮರೆಯುತ 
ಸಂತಸವಾಗಿರಿ ಸಂತತ 
 ಬಿತ್ತರಿಸುತ ಸಂಕ್ರಾಂತಿ ಕಾಳು 
ಹಸನಾಗಿಸೋಣ ಈ ಬಾಳು 
ಅನುಭವಗಳ ಬುತ್ತಿಯೊಡನೆ 
ನವ ಗಮ್ಯಗಳೆಡೆಗೆ ಈ ಸಂಕ್ರಮಣ. 

 - R. R. B.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...