ಶನಿವಾರ, ಜುಲೈ 25, 2020

ಕಳೆದುಹೋದ ಕವಿತೆ...

ಈಗೀಗ ಆಸಕ್ತಿಯೇ ಇಲ್ಲ ಯಾವುದರಲ್ಲೂ 
ಸ್ವಾತಂತ್ರ್ಯದಿ ರೆಕ್ಕೆಬಿಚ್ಚಿ ಹಾರದ ಕನಸು
ಖುಷಿಯ ಗರಿ ಸಿಕ್ಕಿಸಿಕೊಳ್ಳದ ಮನಸು
ಭಾವಗಳ ಬಣ್ಣದಲೂ ಬರೀ ಪೇಲವತೆ
ಹೈವೇಯಲಿ ಕಳೆದುಹೋಗಿದೆ ನನ್ನ ಕವಿತೆ !

ಸುರಿವ ಮಳೆ, ಹಸಿರ ಹೊಳೆ
ಮುಂಜಾವಿನ ಹಕ್ಕಿ ಹಾಡು
ಹರಿವ ಝರಿ, ನವಿಲುಗರಿ
ಫೂಟ್ಪಾತಲಿ ಬಿದ್ದ ಪಾರಿಜಾತ
ಎಲ್ಲಕೂ ಮೌನ ಗೌರಿಯ ವ್ರತ... !

ಆಫೀಸಿನ ಕಿಟಕಿಗಳೋ ಕಿವಿಮುಚ್ಚಿ ಕುಳಿತಿವೆ
ಕೀಬೋರ್ಡಿನ ಕಟಕಟ ಸದ್ದೇ ತಲೆನೋವಾಗಿ...
ಪೌರ್ಣಮಿ ಚಂದ್ರ ಶಾಪಿಂಗ್ ಮಾಲಿಗೆ
ಮಧ್ಯಾಹ್ನದ ಸೂರ್ಯ ತಾರಾಲಯಕ್ಕೆ
ಪಾದ ಬೆಳೆಸಿದ್ದಾರೆ - ಖುಷಿಯ ಹೆಕ್ಕಿ ತರಲು...!

ಹಳೆಯ ನೆನಪುಗಳು ಗುಳೇ ಹೊರಟಿವೆ
ನನ್ನೆದೆಯಿಂದ ಅವನ ಹೃದಯದ ಕಡೆಗೆ..
ನಾನಂತೂ ನೆನಪುಗಳ ಹಿಡಿದು ಬರಿದೇ ಕೂರುತ್ತೇನೆ
ಅವನಾದರೂ ಕವಿತೆ ಗೀಚುತ್ತಾನೆಂಬ‌ ಹಂಬಲದಲ್ಲಿ...!!

- R. R. B.

ಕಾಮೆಂಟ್‌ಗಳಿಲ್ಲ:

ಯುಗಾದಿ

ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...